top of page

FU** You..: ಬೆಂಗಳೂರಲ್ಲಿ ಮತ್ತೊಂದು Auto Driver ಸಂಘರ್ಷ; ರೈಡ್ ಕ್ಯಾನ್ಸಲ್ ಮಾಡಿ ಮನಸೋ ಇಚ್ಛೆ ಬೈದ ಯುವತಿ, Video ವೈರಲ್!

  • Apr 8
  • 1 min read

ಕನ್ನಡ ಬಾರದ ಯುವತಿಯೊಬ್ಬಳು ಏಕಕಾಲದಲ್ಲಿ ಓಲಾ ಮತ್ತು ರ‍್ಯಾಪಿಡೋ ಆ್ಯಪ್ ಗಳಲ್ಲಿ ಆಟೋ ಬುಕ್ ಮಾಡಿದ್ದು, ಈ ವೇಳೆ ಕೊನೆಯ ಕ್ಷಣದಲ್ಲಿ ಒಂದು ಆಟೋ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ.

ree









ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಆಟೋ ಸಂಘರ್ಷ ವರದಿಯಾಗಿದ್ದು, ಎರಡೆರಡು ಆ್ಯಪ್ ನಲ್ಲಿ ರೈಡ್ ಬುಕ್ ಮಾಡಿ ಇಬ್ಬರೂ ಚಾಲಕರು ಬಂದ ಬಳಿಕ ಒಂದರಲ್ಲಿ ಕ್ಯಾನ್ಸಲ್ ಮಾಡಿದ ಯುವತಿ ಆಟೋ ಚಾಲಕನಿಗೇ ಮನಸೋ ಇಚ್ಛೆ ಬೈದಿರುವ ಘಟನೆ ವರದಿಯಾಗಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಬಾರದ ಯುವತಿಯೊಬ್ಬಳು ಏಕಕಾಲದಲ್ಲಿ ಓಲಾ ಮತ್ತು ರ‍್ಯಾಪಿಡೋ ಆ್ಯಪ್ ಗಳಲ್ಲಿ ಆಟೋ ಬುಕ್ ಮಾಡಿದ್ದು, ಈ ವೇಳೆ ಕೊನೆಯ ಕ್ಷಣದಲ್ಲಿ ಒಂದು ಆಟೋ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಆಟೋ ಚಾಲಕ ಬೇರೆ ಆಟೋ ಹತ್ತಿದ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆಕೆ ಆತನ ಆರೋಪ ನಿರಾಕರಿಸಿದ್ದು, ತಾನು ಬುಕ್ ಮಾಡಿಲ್ಲ ಎಂದು ವಾದಿಸಿದ್ದಾಳೆ. ಇದಕ್ಕೆ ಒಬ್ಬದ ಆಟೋ ಚಾಲಕ ನಾನು ಸುಮಾರು 1.5 ಕಿಮೀ ನಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದು 15 ನಿಮಿಷಗಳಾಗಿವೆ. ಆದರೂ ಕಾದು ನಿಂತಿದ್ದೇನೆ. ಇದೀಗ ಬೇರೆ ಆಟೋದಲ್ಲಿ ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾನೆ.

ಇದರಿಂದ ರೊಚ್ಚಿಗೆದ್ದ ಯುವತಿ ಆಟೋ ಚಾಲಕನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿ ಆತನಿಗೆ ಗುದ್ದಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಆಟೋ ಮುಂದಕ್ಕೆ ಸಾಗುತ್ತಲೇ ಚಾಲಕನಿಗೆ ನಿಂದನಾತ್ಮಕ ಪದ ಬಳಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.


ಪೊಲೀಸರ ಮಧ್ಯಪ್ರವೇಶ

ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಮಧ್ಯಪ್ರವೇಶಿಸಿದ್ದು, ಘಟನೆಯ ಸ್ಥಳವನ್ನು ಮತ್ತ ಚಾಲಕನ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ ನೀಡುವಂತೆ ಕೇಳಿದ್ದಾರೆ.

ಆಟೋದವರು ಗ್ರಾಹಕರ ಮಾತುಗಳನ್ನು ಕೇಳುತ್ತಿದ್ದರೆ, ಓಲಾ/ಉಬರ್ ಬರುತ್ತಲೇ ಇರಲಿಲ್ಲ

ಇನ್ನು ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, "ಕಂಪನಿಯು ತನ್ನ ಅಪ್ಲಿಕೇಶನ್‌ನಲ್ಲಿ ರೈಡ್ ರದ್ದುಗೊಳಿಸುವ ವೈಶಿಷ್ಟ್ಯವನ್ನು ನೀಡಿದಾಗ, ಅದನ್ನು ಬಳಸುವುದಕ್ಕಾಗಿ ಗ್ರಾಹಕರನ್ನು ಏಕೆ ದೂಷಿಸುತ್ತೀರಿ? ರೈಡ್ ರದ್ದಿಗಾಗಿ ಸಂಸ್ಥೆ ದಂಡ ಕಲೆಹಾಕುತ್ತಿದೆ. ಸಾಕಷ್ಟು ಬಾರಿ ಚಾಲಕರೇ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದೇ ಕಾರಣಕ್ಕೆ ಪ್ರಯಾಣಿಕರು 2 ಆ್ಯಪ್ ಗಳಲ್ಲಿ ರೈಡ್ ಬುಕ್ ಮಾಡುತ್ತಾರೆ. ಈ ಆಟೋದವರು ಗ್ರಾಹಕರ ಮಾತುಗಳನ್ನು ಕೇಳುತ್ತಿದ್ದರೆ, ಓಲಾ/ಉಬರ್ ಬರುತ್ತಲೇ ಇರಲಿಲ್ಲ. ಇದು ನಿಮ್ಮ ತಪ್ಪಿನ ಪ್ರತಿಫಲ ಎಂದು ಓರ್ವ ಬಳಕೆದಾರ ಟ್ವೀಟ್ ಮಾಡಿದ್ದಾರೆ.

ಮತ್ತೋರ್ವ ಬಳಕೆದಾರ ಟ್ವೀಟ್ ಮಾಡಿ, 'ಆಟೋ ಸವಾರಿ ರದ್ದುಗೊಳಿಸುವುದು ಅಪರಾಧವಲ್ಲ, ಆದರೆ ಅವಾಚ್ಯ ಪದಗಳನ್ನು ಬಳಸಿ ಮತ್ತು ಯಾರಿಗಾದರೂ ಹೊಡೆಯುವುದು ತಪ್ಪು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page