top of page

ಹೊಸಹಳ್ಳಿ ಶ್ರೀ ಮಾರಮ್ಮ ಹಬ್ಬ:ನೀರು ಎರಚಿಕೊಂಡು ಸಂಭ್ರಮಿಸಿದ ಅತ್ತಿಗೆ-ನಾದಿನಿಯರು...



ree

ಮಂಡ್ಯ:ನಗರದ ಹೊಸಹಳ್ಳಿ ರಾಮನಹಳ್ಳಿ ಶ್ರೀ ಬಿಸಿಲು ಮಾರಮ್ಮ ದೇವಾಲಯದಲ್ಲಿ ಸ್ಥಳೀಯ ಗ್ರಾಮಸ್ಥರು ಶ್ರೀಮಾರಮ್ಮ ಹಾಗೂ ಬಿಸಿಲು ಮಾರಮ್ಮ ಹಬ್ಬ ಪ್ರಯುಕ್ತ ಅಕ್ಕಿತೊಳೆಯುವುದು, ಅತ್ತಿಗೆ-ನಾದಿನಿ,ಅಕ್ಕ-ತಂಗಿಯರು ನೀರು ಎರಚಿಕೊಂಡು ಕುಣಿದು ಸಂಭ್ರಮಿಸಿದರು.

ಬಳಿಕ ಮಾತನಾಡಿದ ಗ್ರಾಮದ ಮುಖಂಡ ಹಾಗೂ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಸಹಳ್ಳಿ ಶಿವಲಿಂಗೇಗೌಡ,ನಮ್ಮ ಪೂರ್ವಿಕರ ಕಾಲದಿಂದಲೂ ಗ್ರಾಮದ ಒಳಿತಿಗಾಗಿ ಗ್ರಾಮದೇವತೆ ಶ್ರೀ ಮಾರಮ್ಮ ಮತ್ತು ಶ್ರೀ ಬಿಸಿಲು ಮಾರಮ್ಮ ಉತ್ಸವವು ನಡೆಯುತ್ತಿದೆ, ೨ ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ದೇವರ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆಯುತ್ತವೆ ಎಂದರು.

ಗ್ರಾಮದಲ್ಲಿ ೩ ವರ್ಷಗಳಿಗೊಮ್ಮೆ ಆಚರಿಸುವ ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬವು ೨-೩ದಿನಗಳ ಕಾಲ ನಡೆಯುತ್ತದೆ,ಗ್ರಾಮದೇವತೆ ಹಬ್ಬಗಳಿಂದ ಒಂದೆಡೆ ಸೇರುತ್ತೇವೆ, ದೂರದಲ್ಲಿರುವ ಸಂಬಂಧಿಗಳಲ್ಲಿ ಭಾವೈಕ್ಯತೆ ಬೆಸೆಯುತ್ತದೆ,ಮನೆ ಮಂದಿಯೊಂದಿಗೆ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತದೆ, ಹೆಣ್ಣುಮಕ್ಕಳು ಬಂದು ಸಂಭ್ರಮಿಸು ತ್ತಾರೆ ಎಂದು ತಿಳಿಸಿದರು.

ಮೇ.೧೩ರಂದು ದೇವಾಲಯದ ಆವರಣದಲ್ಲಿ ತಂಬಿಟ್ಟಿನ ಬುಟ್ಟಿಯಲ್ಲಿ ಅಕ್ಕಿ ತಂದು ತೊಳೆದು ಒಣಹಾಕುತ್ತಾರೆ,ಆಗ ಅತ್ತಿಗೆ-ನಾದಿನಿ,ಅಕ್ಕ-ತಂಗಿಯರು, ಹೆಣ್ಣುಮಕ್ಕಳು ನೀರು ಎರಚುವ ಉತ್ಸವದಲ್ಲಿ ಸಂಭ್ರಮಿಸುತ್ತಾರೆ, ಬಳಿಕ ಅಕ್ಕಿಯನ್ನು ಮನೆಗೆ ಕೊಂಡೊಯ್ಯುತ್ತಾರೆ.ಸಂಜೆ ಪೂಜಾ ಕುಣಿತ ನಡೆಯುತ್ತದೆ ಎಂದು ತಿಳಿಸಿದರು.

ಮೇ.೧೪ರಂದು ಹೊಸಹಳ್ಳಿ ರಾಮನಹಳ್ಳಿ ಗ್ರಾಮಸ್ಥರು ಒಗ್ಗೂಡಿ, ಭಾವೈಕ್ಯತೆಯಿಂದ ಶ್ರೀ ಮಾರಮ್ಮ ದೇವತೆಗೆ ಶ್ರದ್ದಾಭಕ್ತಿಯಿಂದ ಪೂಜಾ ಕೈಂಕರ್ಯಗಳು ನಡೆದು,ಬಿದಿರು ಬುಟ್ಟಿಯಲ್ಲಿ ತಂಬಿಟ್ಟಿನ ಆರತಿಯ ಮೆರವಣಿಗೆ ಸಾಗಿ ತಂಪು ತೋರಿ ಪೂಜೆ ಸಲ್ಲಿಸುತ್ತೇವೆ ಎಂದರು.

ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬದಿಂದ ಮಳೆ-ಬೆಳೆ,ಗ್ರಾಮವು ನೆಮ್ಮದಿಯಾಗಿರಿಲಿ ಎನ್ನುವುದು ಪೂರ್ವಿಕರ ನಂಬಿಕೆಯಾಗಿದೆ, ಅಂದಿನಿಂದ ಇಂದಿನವರೆಗೂ ಮುಂದುವರಿಕೊಂಡು ಬಂದಿದೆ ಎಂದು ಹೇಳಿದರು.

ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ರಾಮಣ್ಣ, ಸಿದ್ದಪ್ಪ, ಸುರೇಶ್, ನಿಂಗಣ್ಣ, ಪಾಪೇಗೌಡ,ಸ್ಥಳೀಯ ಮುಖಂಡರಾದ ರೇವಣ್ಣ,

ಬಿ.ಬೋರೇಗೌಡ ಇತರರು  ಹಾಜರಿದ್ದರು.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page