ಹೊಸಹಳ್ಳಿಯಲ್ಲಿ ಶ್ರೀಮಾರಮ್ಮನ ಉತ್ಸವ...
- Prajanudi Digital
- May 15
- 1 min read

ಮಂಡ್ಯ:ನಗರದಲ್ಲಿರುವ ಹೊಸಹಳ್ಳಿ-ರಾಮನಹಳ್ಳಿ ಗ್ರಾಮಸ್ಥರು ಗ್ರಾಮದೇವತೆ ಹಬ್ಬವಾದ ಶ್ರೀಮಾರಮ್ಮ ಮತ್ತು ಶ್ರೀಬಿಸಿಲುಮಾರಮ್ಮ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.
ಗ್ರಾಮದಲ್ಲಿರುವ ಶ್ರೀ ಮಾರಮ್ಮ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದು, ಸಾಮೂಹಿಕ ತಂಬಟ್ಟಿನ ಆರತಿಯೊಂದಿಗೆ ಪೂಜಾ ಕುಣಿತ, ವೀರಗಾಸೆ ಕುಣಿತದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ವಿಜೃಂಭಣೆಯೊಂದಿಗೆ ಆಚರಿಸಲಾಯಿತು.
ಹೊಸಹಳ್ಳಿ-ರಾಮನಹಳ್ಳಿ ವೃತ್ತದಲ್ಲಿರುವ ಶ್ರೀ ಬಿಸಿಲು ಮಾರಮ್ಮ ದೇವಾಲಯದಲ್ಲಿ ಸ್ಥಳೀಯ ಗ್ರಾಮಸ್ಥರು ಜಮಾವಣೆ ಗೊಂಡು ಗ್ರಾಮದೇವತೆಗೆ ತಂಪು ತೋರಿದರು.
ಬಳಿಕ ಮಾತನಾಡಿದ ಗ್ರಾಮದ ಮುಖಂಡ ಹೊಸಹಳ್ಳಿ ಶಿವಲಿಂಗೇಗೌಡ,ನಮ್ಮ ಪೂರ್ವಿಕರ ಕಾಲದಿಂದಲೂ ಗ್ರಾಮದ ಒಳಿತಿಗಾಗಿ ಗ್ರಾಮದೇವತೆ ಶ್ರೀ ಮಾರಮ್ಮ ಮತ್ತು ಶ್ರೀ ಬಿಸಿಲು ಮಾರಮ್ಮ ಉತ್ಸವವು ನಡೆಯುತ್ತಿದೆ, ೨ ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ದೇವರ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆದವು ಎಂದು ತಿಳಿಸಿದರು.
ಗ್ರಾಮದಲ್ಲಿ ೩ ವರ್ಷಗಳಿಗೊಮ್ಮೆ ಆಚರಿಸುವ ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬವು ೨-೩ದಿನಗಳ ಕಾಲ ನಡೆಯುತ್ತದೆ, ಗ್ರಾಮದೇವತೆ ಹಬ್ಬಗಳಿಂದ ಒಂದೆಡೆ ಸೇರುತ್ತೇವೆ, ದೂರದಲ್ಲಿರುವ ಸಂಬಂಧಿಗಳಲ್ಲಿ ಭಾವೈಕ್ಯತೆ ಬೆಸೆಯುತ್ತದೆ,ಮನೆ ಮಂದಿಯೊಂದಿಗೆ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತದೆ, ಹೆಣ್ಣುಮಕ್ಕಳು ಬಂದು ಸಂಭ್ರಮಿಸುತ್ತಾರೆ ಎಂದು ತಿಳಿಸಿದರು.
ಹೊಸಹಳ್ಳಿ-ರಾಮನಹಳ್ಳಿ ಗ್ರಾಮಸ್ಥರು ಒಗ್ಗೂಡಿ, ಭಾವೈಕ್ಯತೆಯಿಂದ ಶ್ರೀ ಮಾರಮ್ಮ ದೇವತೆಗೆ ಶ್ರದ್ದಾಭಕ್ತಿಯಿಂದ ಪೂಜಾ ಕೈಂಕರ್ಯಗಳು ನಡೆದು,ಬಿದಿರು ಬುಟ್ಟಿಯಲ್ಲಿ ತಂಬಿಟ್ಟಿನ ಆರತಿಯ ಮೆರವಣಿಗೆ ಸಾಗಿ ತಂಪು ತೋರಿ ಪೂಜೆ ಸಲ್ಲಿಸಿದೇವು ಎಂದರು.
ಗ್ರಾಮದೇವತೆ ಶ್ರೀ ಮಾರಮ್ಮ ಹಬ್ಬದಿಂದ ಮಳೆ-ಬೆಳೆ,ಗ್ರಾಮವು ನೆಮ್ಮದಿಯಾಗಿರಿಲಿ ಎನ್ನುವುದು ಪೂರ್ವಿಕರ ನಂಬಿಕೆಯಾಗಿದೆ, ಅಂದಿನಿಂದ ಇಂದಿನವರೆಗೂ ಮುಂದುವರಿಕೊಂಡು ಬಂದಿದೆ ಎಂದು ಹೇಳಿದರು.
ಗ್ರಾಮದ ಯಜಮಾನರಾದ ರಾಮಣ್ಣ,ಸಿದ್ದಪ್ಪ, ಸುರೇಶ್, ನಿಂಗಣ್ಣ, ಪಾಪೇಗೌಡ,ಸ್ಥಳೀಯ ಮುಖಂಡರಾದ ರೇವಣ್ಣ,
ಬಿ.ಬೋರೇಗೌಡ ಇತರರು ಹಾಜರಿದ್ದರು.

Comments