ಸ್ನೇಹ ಅಂತ ಒಳಗೊಳ್ಗೆ ಸ್ಕೆಚ್ ಹಾಕಿದ್ರಾ..?
- Prajanudi Digital
- May 5
- 2 min read


ಕಾರ್ತಿಕ್ ಮೈಸೂರು ತಾಲೂಕು ವರುಣ ಗ್ರಾಮದ ಸಮೀಪವಿದ್ದ ಹೋಟೆಲ್ ಯತೀನ್ ನಲ್ಲಿ ಕಳೆದ 5 ದಿನಗಳಿಂದ ಆಯಾಗಿದ್ದ. ನಿನ್ನೆ ಹೊರಗೆ ಹೋಗಿದ್ದ ಆಸಾಮಿ ಮಧ್ಯರಾತ್ರಿ 1.40ಕ್ಕೆ ಸರಿಯಾಗಿ ಹೋಟೆಲ್ ಮುಂದೆ ಬಂದಾಗ ಡೆಡ್ಲಿ ಅಟ್ಯಾಕ್ ನಡೆದಿದೆ. ಸಾರಿ ಕೇಳುವ ನೆಪದಲ್ಲಿ ಬಂದ ಕೊಲೆಗಾರರ ಗ್ಯಾಂಗ್ ಒಬ್ಬನೇ ಇದ್ದದ್ದನ್ನ ಕಂಡು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಅಂದ ಹಾಗೆ ಕೊಲೆಯಾದ ಕಾರ್ತಿಕ್ ಗೆ ಈಗಿನ್ನೂ 33 ವರ್ಷ. ಮೈಸೂರಿನ ಕ್ಯಾತಾಮಾರನಹಳ್ಳಿ ನಿವಾಸಿಯಾದ ಈತ ಹಲವು ಕೇಸ್ ಗಳಲ್ಲಿ ಭಾಗಿಯಾಗಿದ್ದ. ಈ ಕಾರಣಕ್ಕಾಗಿಯೇ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಜೊತೆಗೆ ಈತನನ್ನು ಏರಿಯಾದಿಂದ ಗಡಿಪಾರು ಕೂಡ ಮಾಡಲಾಗಿತ್ತು. ಈತನ ಜೊತೆಗಿದ್ದ ಮೈಸೂರಿನ ಗಾಯತ್ರಿಪುರಂ ನಿವಾಸಿ ಪ್ರವೀಣ್ ಜೊತೆಗೆ ಒಂದೂವರೆ ವರ್ಷದ ಹಿಂದೆ ಹಣಕಾಸಿನ ವಿಚಾರ ಹಾಗೂ ಹುಡುಗಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಲಕ್ಷ್ಮಿ ಎಂಬುವಳ ಜೊತೆ ಈ ಪ್ರವೀಣ ಸಹವಾಸ ಮಾಡಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಕೊಲೆಯಾದ ರೌಡಿಶೀಟರ್ ಮತ್ತೆ ಈ ಪ್ರವೀಣ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ.

ಅದಾದ ಬಳಿಕ ಮೈಸೂರಿನಲ್ಲಿದ್ದ ಈ ಪ್ರವೀಣ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದ. ಈಗ ನಾಲ್ಕು ದಿನಗಳಿಂದ ರೂಮ್ ನಲ್ಲಿ ಲವರ್ ಜೊತೆ ಒಬ್ಬನೇ ಇದ್ದಾನೆ ಅನ್ನೋ ವಿಚಾರವನ್ನ ಈ ಗ್ಯಾಂಗ್ ತಿಳಿದುಕೊಂಡಿತ್ತು. ತಡರಾತ್ರಿ ಫೋನ್ ಮಾಡಿ ಸಾರಿ ಕೇಳುವ ನೆಪದಲ್ಲಿ ಮೃತ ರೌಡಿಶೀಟರ್ ನನ್ನ 1 ಗಂಟೆ 40 ನಿಮಿಷದಲ್ಲಿ ಹೊರಗೆ ಕರೆಸಿದ್ರು ಹೊರಗೆ ಬಂದ ಬಳಿಕ ಒಂದು ಬೈಕ್ ಒಂದು ಕಾರ್ ನಲ್ಲಿ ಬಂದ ಗ್ಯಾಂಗ್ ಏಕಏಕಿ ಲಾಂಗು ಮತ್ತೆ ಮಚ್ಚುಗಳಿಂದ ಕೊಂದು ಎಸ್ಕೇಪ್ ಆಗಿದ್ದಾರೆ. ಕೊಲೆ ಮಾಡಿರುವ ದೃಶ್ಯ ಹೋಟೆಲ್ ನಲ್ಲಿ ಹಾಕಲಾಗಿದ್ದ ಸಿಸಟಿವಿಯಲ್ಲಿ ಸೆರೆಯಾಗಿದೆ...
ಇನ್ನು ಮಗನಿಗೆ ರಾತ್ರಿ 10.45ರಲ್ಲಿ ಫೋನ್ ಮಾಡಿ ಊಟ ಮಾಡಿಕೊಂಡು ಹೋಗಲು ಹೇಳಿದ್ದ ತಾಯಿ, ಚಪಾತಿ ಮಾಡಿ ಬಡಿಸಿದ್ದರು. ಕಾರ್ತಿಕ್ ರಾತ್ರಿ 11.30ಕ್ಕೆ ಬಂದು ಊಟ ಮಾಡಿಕೊಂಡು ಹೋದ. ನಂತರ ರಾತ್ರಿ 1.30ಕ್ಕೆ ಆತನ ಜೊತೆಗಿದ್ದ ಹುಡುಗಿಯಿಂದ ಪೋನ್ ಬಂದಿದ್ದು, ತಾಯಿ ತೆಗೆದಿರಲಿಲ್ಲ. ನಂತರ ಬೆಳಿಗ್ಗೆ ಆತನ ಸ್ನೇಹಿತರು ಮನೆ ಮುಂದೆ ಬಂದು ಕೂಗಾಡಿದಾಗ ವಿಷಯ ಗೊತ್ತಾಗಿದ್ದು, ಲಕ್ಷ್ಮಿ ಎಂಬುವಳ ಮೂಲಕ ಪ್ರವೀಣ್ನಿಂದ ಈ ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾಳೆ.
ಒಟ್ಟಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಗ್ಯಾಂಗ್ ಸ್ಟಾರ್ ಆಗಬೇಕು ಎಂದು ಹೊರಟವ ಮಸಣ ಸೇರಿದ್ದಾನೆ. ಹಣಕಾಸು ಮತ್ತು ಹೆಣ್ಣಿನ ವಿಚಾರಕ್ಕೆ ಸ್ಕೆಚ್ ಹಾಕಿದ್ದ ಆಗಂತುಕರು ಎಸ್ಕೇಪ್ ಆಗಿದ್ದಾರೆ. ವರಣ ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ತಂಡ ರಚನೆ ಮಾಡಿದ್ದೂ ನಾಪತ್ತೆಯಾಗಿರುವ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Comments