top of page

ಬೆಂಗಳೂರು: HSRP ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ: ಡಿಸೆಂಬರ್ 31 ಲಾಸ್ಟ್ ಡೇಟ್ !

  • Apr 8
  • 2 min read

ಗಮನಾರ್ಹ ಸಂಖ್ಯೆಯ ವಾಹನಗಳು ಇನ್ನೂ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್ ಪ್ಲೇಟ್‌ಗಳನ್ನು ಅಳವಡಿಸಿಲ್ಲ ಎಂದು ಉಲ್ಲೇಖಿಸಿ ಸಾರಿಗೆ ಆಯುಕ್ತರ ಕಚೇರಿಯು ಸಾರಿಗೆ ಸಚಿವರು ಮತ್ತು ಕಾರ್ಯದರ್ಶಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 5 ನೇ ಬಾರಿಗೆ ಗಡುವು ವಿಸ್ತರಿಸಲಾಗಿದೆ.

ree









ಬೆಂಗಳೂರು: ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ನೋಂದಣಿಯ ಕೊನೆಯ ದಿನಾಂಕವನ್ನು ಈ ವರ್ಷ ಡಿಸೆಂಬರ್ 31 ರವರೆಗೆ ವಿಸ್ತರಿಸಲು ಕರ್ನಾಟಕ ರಾಜ್ಯ ನಿರ್ಧರಿಸಿದೆ.

ಸದ್ಯದ ಗಡುವು ನವೆಂಬರ್ 30 ರಂದು ಮುಕ್ತಾಯಗೊಳ್ಳುತ್ತದೆ. ಗಮನಾರ್ಹ ಸಂಖ್ಯೆಯ ವಾಹನಗಳು ಇನ್ನೂ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್ ಪ್ಲೇಟ್‌ಗಳನ್ನು ಅಳವಡಿಸಿಲ್ಲ ಎಂದು ಉಲ್ಲೇಖಿಸಿ ಸಾರಿಗೆ ಆಯುಕ್ತರ ಕಚೇರಿಯು ಸಾರಿಗೆ ಸಚಿವರು ಮತ್ತು ಕಾರ್ಯದರ್ಶಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 5 ನೇ ಬಾರಿಗೆ ಗಡುವು ವಿಸ್ತರಿಸಲಾಗಿದೆ.

ಎಚ್ ಎಸ್ ಆರ್ ಪಿ ಅಳವಡಿಸದಿದ್ದರೇ ವಿಧಿಸಬೇಕಾದ ದಂಡ ಮತ್ತು ಸಂಭವನೀಯ ವಿಸ್ತರಣೆಯ ಕುರಿತು ನ್ಯಾಯಾಲಯದ ತೀರ್ಪು ಡಿಸೆಂಬರ್ 4 ರಂದು ಪ್ರಕವಾಗುವ ನಿರೀಕ್ಷೆಯಿದೆ. ನಿರ್ದಿಷ್ಟ ವರ್ಗದಲ್ಲಿನ ದೋಷದಿಂದಾಗಿ ಜನರು ಪೋರ್ಟಲ್ ಮೂಲಕ ಎಚ್‌ಎಸ್‌ಆರ್‌ಪಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳಿಂದ ರಾಜ್ಯಾದ್ಯಂತ ಕೇಳಿ ಬರುತ್ತಿವೆ. ನಾವು ಈ ವರ್ಷದ ಡಿಸೆಂಬರ್ 31 ರವರೆಗೆ ಗಡುವನ್ನು ವಿಸ್ತರಿಸಲು ಯೋಜಿಸುತ್ತಿದ್ದೇವೆ. ಸಹಜವಾಗಿ, ಇದು ಡಿಸೆಂಬರ್ 4 ರಂದು ಕಾಯುತ್ತಿರುವ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಗಡುವು ವಿಸ್ತರಣೆ ಮತ್ತು ನಿಯಮ ಪಾಲಿಸದ ಸವಾರರ ವಿರುದ್ಧ ಶಿಕ್ಷಾರ್ಹ ಕ್ರಮಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. HSRP ಪ್ಲೇಟ್‌ಗಳನ್ನು ಉತ್ಪಾದಿಸಲು ನಿರ್ದಿಷ್ಟ ತಯಾರಕರಿಗೆ ಮಾತ್ರ ಅನುಮತಿ ನೀಡುವ ಸಾರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ HSRP ತಯಾರಕರ ಸಂಘ ಸಲ್ಲಿಸಿದ್ದ ಪರಿಶೀಲನಾ ಅರ್ಜಿಗಳನ್ನು ಸಹ ಇದು ವಿಚಾರಣೆ ನಡೆಸುತ್ತಿದೆ.


ಏಪ್ರಿಲ್ 1, 2019 ರ ಮೊದಲು ಖರೀದಿಸಿದ ಎಲ್ಲಾ ವಾಹನಗಳಿಗೆ ಈ ಟ್ಯಾಂಪರ್-ಪ್ರೂಫ್ ನೋಂದಣಿ ಫಲಕಗಳನ್ನು ಅಳವಡಿಸುವುದನ್ನು ಸಾರಿಗೆ ಇಲಾಖೆಯು ಆಗಸ್ಟ್ 2023 ರಲ್ಲಿ ಕಡ್ಡಾಯಗೊಳಿಸಿದೆ. ಕಳೆದ ವರ್ಷ ನವೆಂಬರ್ 17 ಕ್ಕೆ ಗಡುವನ್ನು ನಿಗದಿಪಡಿಸಲಾಗಿತ್ತು ಮತ್ತು ನಿಯಮವನ್ನು ಪಾಲಿಸದಿದ್ದಕ್ಕಾಗಿ ದಂಡವನ್ನು ಘೋಷಿಸಲಾಯಿತು. ಬಹುಪಾಲು ವಾಹನಗಳು ಇನ್ನೂ ಈ ಪ್ಲೇಟ್‌ಗಳನ್ನು ಅಳವಡಿಸದ ಕಾರಣ ಅನೇಕ ಬಾರಿ ಗಡುವು ವಿಸ್ತರಿಸಲಾಗಿದೆ.

2012 ರಲ್ಲಿ ಡೇಟಾ ಎಂಟ್ರಿ ಕಾರ್ಯವನ್ನು ಕೈಗೊಳ್ಳಲು ಹೊರಗುತ್ತಿಗೆ ಪಡೆದ ಸಂಸ್ಥೆಯು ಮಾಡಿದ ಮೂಲಭೂತ ದೋಷವು ಆನ್‌ಲೈನ್ ವಾಹನ ಪೋರ್ಟಲ್‌ನಲ್ಲಿ ಎಚ್‌ಎಸ್‌ಆರ್‌ಪಿ ನೋಂದಾಯಿಸಲು ಪ್ರಯತ್ನಿಸುವಾಗ ಸಾವಿರಾರು ವಾಹನ ಮಾಲೀಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭೌತಿಕ RC ನಕಲು ನಿರ್ದಿಷ್ಟ ಹೆಸರನ್ನು ಹೊಂದಿರುವುದರಿಂದ ಇದು ಈಗ ಅನೇಕ ಜನರಿಗೆ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದಾಗಿ ಎಚ್‌ಎಸ್‌ಆರ್‌ಪಿಗೆ ನೋಂದಾಯಿಸಲು ಬಯಸುತ್ತಿರುವ ಅನೇಕ ಜನರಿಗೆ ಸಿಸ್ಟಮ್ ಅನುಮತಿ ನೀಡುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗ, ದೆಹಲಿಯಲ್ಲಿರುವ ಎನ್‌ಐಸಿಯಿಂದ ಮಾತ್ರ ತಿದ್ದುಪಡಿ ಸಾಧ್ಯ. “ಇದೀಗ ಕೆಲವು ತಿಂಗಳುಗಳಿಂದ, ರಾಜ್ಯದಾದ್ಯಂತ ಕನಿಷ್ಠ 1,000 ವಾಹನ ಬಳಕೆದಾರರು ಆನ್‌ಲೈನ್‌ನಲ್ಲಿ ನೋಂದಾಯಿಸಲು ಪ್ರಯತ್ನಿಸಿದಾಗ ಈ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ, ತಮ್ಮ ಭೌತಿಕ ಆರ್‌ಸಿ ಪುಸ್ತಕಗಳೊಂದಿಗೆ ನಮ್ಮ ಕಚೇರಿಗೆ ಬರುತ್ತಾರೆ ಮತ್ತು ದೋಷವನ್ನು ಸರಿಪಡಿಸಲು ನಾವು ಅವರನ್ನು ದೆಹಲಿಗೆ ಕಳುಹಿಸಿದ್ದೇವೆ. ರಾಜ್ಯದಲ್ಲಿ ಕನಿಷ್ಠ ಶೇಕಡಾ 20 ರಷ್ಟು ವಾಹನಗಳು ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಅವರು ಹೇಳಿದರು.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page