top of page

ರಾಜಮಾತೆ ಪ್ರಮೋದಾದೇವಿ ಸ್ಪಷ್ಟನೆ...

ree

ಮೈಸೂರು ದಸರಾ ೧೧ ದಿನ ಆಚರಣೆ ಹೊಸದೇನಲ್ಲ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾವನ್ನು ೯ ದಿನಗಳು ಮಾತ್ರವಲ್ಲದೆ, ೧೧ ದಿನಗಳ ಕಾಲ ಆಚರಣೆ ಮಾಡಿರುವ ಸಾಕಷ್ಟು ನಿದರ್ಶನಗಳಿವೆ ಎಂದು ರಾಜಮಾತೆ ಪ್ರಮೋದಾದೇವಿ ಸ್ಪಷ್ಟನೆ ನೀಡಿದ್ದಾರೆ.

ಪ್ರತಿ ವರ್ಷ ೯ ದಿನಗಳ ಕಾಲ ನಡೆಯುವ ದಸರಾ ಈ ಬಾರಿ ೧೧ ದಿನಗಳ ಕಾಲ ನಡೆಯಲಿದ್ದು, ೪೦೦ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ೧೧ ದಿನ ನಡೆಯುತ್ತಿದೆ ಎಂಬ ಸುದ್ದಿ ಹಿನ್ನೆಲೆ, ಪತ್ರಿಕಾ ಪ್ರಕಟಣೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ೧೧ ದಿನಗಳ ಕಾಲ ಆಚರಣೆ ಮಾಡುತ್ತಿರುವುದು ಹೊಸದಲ್ಲ. ಈ ಹಿಂದೆಯೂ ಹಲವು ಬಾರಿ ಅರಮನೆಯ ಕ್ಯಾಲೆಂಡರ್ ಅನ್ವಯ ದಸರಾವನ್ನು ೧೧ ದಿನಗಳ ಕಾಲ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ಅದೇ ರೀತಿ ಈ ಬಾರಿಯೂ ಸಹ ೧೧ ದಿನಗಳ ಕಾಲ ನಡೆಯಲಿದೆ. ಹೀಗೆ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ, ಅಲ್ಲದೆ ಇದರಲ್ಲಿ ಯಾವುದೇ ವಿಶೇಷತೆ ಕೂಡ ಇಲ್ಲ. ನಾಡಹಬ್ಬ ಹಾಗೂ ಅರಮನೆಯ ನವರಾತ್ರಿಗಳು ಸಾಂಪ್ರದಾಯಿಕವಾಗಿ ಈ ಹಿಂದಿನAತೆಯೇ ನಡೆಯಲಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ದಸರಾ ಹಬ್ಬವನ್ನು ಈ ಹಿಂದೆಯೂ ೧೧ ದಿನಗಳು, ಅಷ್ಟರಾತ್ರಿಗಳು, ನವರಾತ್ರಿಗಳು, ದಶರಾತ್ರಿಗಳು ಹಾಗೂ ೧೧ ದಿನಗಳ ಕಾಲ ನಡೆಸಿದ ಹಲವು ನಿದರ್ಶನಗಳಿವೆ. ಮುಖ್ಯವಾಗಿ ಅರಮನೆಯ ಪಂಚಾAಗದ ಅನುಸಾರ, ಹಬ್ಬದ ಆಚರಣೆಗಳ ಅವಧಿಯ ವ್ಯತ್ಯಾಸಗಳು ಖಗೋಳ ಅಂಶಗಳಿAದ ನಿರ್ದಿಷ್ಟವಾಗಿ ಸೂರ್ಯ ಮತ್ತು ಚಂದ್ರನ ಚಲನೆ ಹಾಗೂ ಚಂದ್ರನ ದಿನಗಳು ಹಾಗೂ ದಿನಾಂಕಗಳ ಜೋಡಣೆಯನ್ನ ನಿರ್ಧರಿಸುತ್ತವೆ. ವಾಸ್ತವಿಕವಾಗಿ ದಸರಾವನ್ನ ಅಂಕಿಗಳಲ್ಲಿ ೧೯೨೦, ೧೯೨೯, ೧೯೫೨, ೧೯೬೨, ೧೯೮೦, ೧೯೯೦, ೧೯೯೮, ೨೦೦೦, ೨೦೧೫ ಹಾಗೂ ೨೦೧೬ರಲ್ಲಿ ದಸರಾವನ್ನ ೧೧ ದಿನಗಳ ಕಾಲ ಆಚರಣೆ ಮಾಡಲಾಗಿದೆ ಎಂದು ರಾಜಮಾತೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ...

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page